Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಗೋವಿಂದ` ಮೂವತ್ತು, ಸೆನ್ಸಾರ್ ಬಂತು
Posted date: 23 Fri, Mar 2012 ? 08:48:18 AM

ಶ್ರೀ ಸುರೇಶ್ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಪಕ ಸುರೇಶ್ ೨೮ ದಿವಸಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ೧೫ ದಿವಸಗಳಲ್ಲಿ ಕರ್ನಾಟಕದ ರಮ್ಯ ಮನೋಹರ ಸ್ಥಳಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಿದ ’ಗೋವಿಂದಾಯ ನಮಃ’ ಸೆನ್ಸಾರ್ ಬಳಿಯಿಂದ ’ಯು/ಎ’ ಅರ್ಹತಾ ಪತ್ರವನ್ನು ಪಡೆದು ಈ ತಿಂಗಳ ೩೦ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹಾಡುಗಳಲ್ಲಿ  ಪ್ಯಾರ್‌ಗೆ ಆಗ್ಬುಟೈತೆ................. ಕ್ರಾಂತಿಯನ್ನೇ ಸೃಷ್ಟಿಸಿದ್ದು ರಜತ ಪರದೆಯ ಮೇಲೆ ಇನ್ನಷ್ಟು ಪ್ರಭಾವವನ್ನು ಬೀರಲಿದೆ.

ಸಾಫ್ಟವೇರ್ ಉದ್ಯೋಗಿಯಾಗಿದ್ದುಕೊಂಡು ಹಾಸ್ಯ ಮನರಂಜನೆ ಸಿನಿಮಾಕ್ಕೆ ಪಾದಾರ್ಪಣೆ ಮಾಡುತ್ತಿರುವ ಪವನ್ ವಾಡಿಯಾರ್ ನಾಯಕನಿಗೆ ಪ್ರೀತಿಯ ಹುಡುಕಾಟದಲ್ಲಿ ತೊಡಗಿಸಿದ್ದಾರೆ. ಗೋವಿಂದ ಗೋವಿಂದ ಎಂದು ನಾಲ್ಕು ಹುಡುಗಿಯರ ಬೆನ್ನ ಹಿಂದೆ ಬೀಳುವ ನಾಯಕ ನಟ ಕೋಮಲ್ ಕುಮಾರ್ ಕೊನೆಗೂ ಪ್ರೀತಿಯನ್ನು ಪ್ರೀತಿಯಿಂದಲೇ ಗೆದ್ದು ಬಿಡುವುದೇ ಈ ಹಾಸ್ಯಮಯ ಕೌಟುಂಬಿಕ ’ಗೋವಿಂದಾಯ ನಮಃ’.  ನಿರ್ದೇಶಕ ಪವನ್ ವಾಡಿಯಾರ್ ತಮ್ಮ ಮೊದಲ ಪ್ರಯತ್ನದಲ್ಲಿ ಕತೆ, ಚಿತ್ರಕತೆ ಸಂಭಾಷಣೆ, ೨ ಹಾಡುಗಳು ಹಾಗೂ ನಿರ್ದೇಶನವನ್ನು ಒದಗಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೃತ್ತಿ ಜೀವನದಿಂದ ರಜೆ ಪಡೆದು ನಿರ್ದೇಶನಕ್ಕೆ ದುಮುಕಿದ್ದಾರೆ. ನಿರ್ಮಾಪಕ ಸುರೇಶ್ ಅವರ ಪ್ರಕಾರ ಈ ಚಿತ್ರವು ಕಾಮಿಡಿ, ಪ್ರೀತಿ, ಸಾಹಸ ಎಲ್ಲವೂ ಒಳಗೊಂಡಿದ್ದು ಸಿನಿಮಾ ಪ್ರೇಕ್ಷಕನಿಗೆ ಉತ್ತಮ ಚಿತ್ರವಾಗಲಿದೆ.

ಈ ಹಾಸ್ಯಮಯ ಚಿತ್ರಕ್ಕೆ ಕೋಮಲ್ ಕುಮಾರ್ ಜೊತೆಗೆ ನಾಯಕಿಯರಾಗಿ ಮಧುಲಿಕಾ, ರೇಖಾ, ಪಾರುಲ್ ಯಾಸ್ ಹಾಗೂ ವಿದೇಶಿ ಬೆಡಗಿ ಆನ ಬಾರ್ಬರ ಅಭಿನಯಿಸಿದ್ದಾರೆ. ವಿದೇಶಿ ಬೆಡಗಿ ಆನ ಅವರಿಂದಲೇ ಕನ್ನಡದ ಅಣಿಮುತ್ತುಗಳನ್ನು ಹೇಳಿಸಿದ್ದಾರೆ. ಗುರುಕಿರಣ್ ಅವರ ಸಂಗೀತವನ್ನು ಹೊಂದಿರುವ ಈ ಚಿತ್ರಕ್ಕೆ  ಸುರೇಶ್ ಬಾಬು ಅವರ ಛಾಯಾಗ್ರಹಣ ಇದೆ.
 
ತಾರಾಗಣದಲ್ಲಿ ತಬಲಾ ನಾಣಿ, ಮುಖ್ಯಮಂತ್ರಿ ಚಂದ್ರು, ಕಿರ್ಲೋಸ್ಕರ್ ಸತ್ಯ, ಹರೀಶ್ ರಾಜ್, ವಿನಾಯಕ್ ಜೋಶಿ ಸಹ ಅಭಿನಯ ಮಾಡಿದ್ದಾರೆ. ಅಂತರ್ಜಾಲ ಮಾಧ್ಯಮದಲ್ಲಿ ಈ ಚಿತ್ರದ ಒಂದು ಹಾಡು ಪ್ಯಾರ್‌ಗೆ ಆಗ್ಬುಟೈತೆ................. ಅನೇಕ ದಾಖಲೆಗಳನ್ನು ಮುರಿದು ಹಾಕಿ ಕನ್ನಡ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿ ಮಾಡಿಕೊಟ್ಟಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಗೋವಿಂದ` ಮೂವತ್ತು, ಸೆನ್ಸಾರ್ ಬಂತು - Chitratara.com
Copyright 2009 chitratara.com Reproduction is forbidden unless authorized. All rights reserved.